ರಾಯಲ ಜಾನಕಿರಾಮಯ್ಯ ಅರ್ಪಿಸುವ, ಯಶಸ್ವಿನಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಸುಂಕೆಶುಲ ರಾಜಬಾಬು ಅವರ ಸಾರಥ್ಯದಲ್ಲಿ, ಮೇಗೋಟಿ ಉಮಾ ಮಹೆಶ್ವರಿ, ಮೇಗೋಟಿ ಸಂಜೀವ್ ಕುಮಾರ್ ನಿರ್ಮಿಸಿರುವ ‘ದಂಡು’ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಸಂಜೀವ್ ಮೇಗೋಟಿ ಅವರು ಕಥೆ, ಚಿತ್ರಕಥೆ ಬರೆದು ಸಂಗೀತ ನೀಡಿ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಹರೀಶ್ ಸೊಂಡೆಕೊಪ್ಪ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು, ಅಲ್ಟಿಮೆಟ್ ಶಿವು, ಸತೀಶ್ ರೆಡ್ಡಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸಂಡೂರು ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ. ನೀರಜ್ ಶಾಮ್, ಸಾಯಿಕುಮಾರ್, ನೇಹ ಸಕ್ಸೇನ, ದಿಶಾ ಪೂವಯ್ಯ, ಥ್ರಿಲ್ಲರ್ ಮಂಜು, ತುಳಸಿ ಶಿವಮಣಿ, ರಮೇಶ್ ಭಟ್, ಮಿತ್ರ, ಮೀನಾಕ್ಷಿ, ಕುಲದೀಪ್, ನಿರಂಜನ್, ಸಂತೋಷ್ ಬಾಲಾಜಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.